ಎಚ್‌ ಡಿ ಕೋಟೆ: ಹೆಣ್ಣು ಮಕ್ಕಳ ಜೊತೆ ಪೇದೆ ಅಸಭ್ಯ ವರ್ತನೆ ಆರೋಪ; ಪೇದೆ ಅಮಾನತು

ದೂರು ನೀಡಲು ಬಂದಿದ್ದ ಹೆಣ್ಣು ಮಕ್ಕಳ ಜೊತೆ ಪೇದೆಯೋರ್ವ ಅಸಭ್ಯವಾಗಿ ವರ್ತಿಸಿದ್ದರಿಂದ ಆತನನ್ನು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಎಚ್‌ ಡಿ ಕೋಟೆ: ದೂರು ನೀಡಲು ಬಂದಿದ್ದ ಹೆಣ್ಣು ಮಕ್ಕಳ ಜೊತೆ ಪೇದೆಯೋರ್ವ ಅಸಭ್ಯವಾಗಿ ವರ್ತಿಸಿದ್ದರಿಂದ ಆತನನ್ನು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಮಾನತುಗೊಳಿಸಿದ್ದಾರೆ.
ಶ್ರೀನಿವಾಸ್ ಅಮಾನತಾದ ಪೇದೆ. ಎಚ್ ಡಿ ಕೋಟೆ ಸರಗೂರಿನ ರಾಘವೇಂದ್ರ ಎಂಬುವರು ಕಾರಿನಲ್ಲಿ ತಮ್ಮ ಕುಟುಂಬದವರ ಜೊತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂಲಕ ನೆರೆಯ ಕೇರಳ ಗಡಿ ಭಾಗದ ಬಾವಲಿ ಎಂಬಲ್ಲಿಗೆ ತಲುಪಿ ಹಿಂದಿರುಗುತ್ತಿದ್ದಾಗ ಕಾರಿಗೆ ಸರ್ಕಾರಿ ಬಸ್ಸೊಂದು ಡಿಕ್ಕಿ ಹೊಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾಘವೇಂದ್ರ ಕುಟುಂಬ ಸಮೇತ ಎಚ್ ಡಿ ಕೋಟೆ ತಾಲೂಕಿನ ಅಂತರ ಸಂತೆ ಹೊರ ಠಾಣೆಯಲ್ಲಿ ದೂರು ದಾಖಲಿಸಲು ಕುಟುಂಬ ಸಮೇತ ಬಂದಿದ್ದರು.
ಈ ವೇಳೆಯಲ್ಲಿ ಶ್ರೀನಿವಾಸ್, ಸರ್ಕಾರಿ ಬಸ್ ಚಾಲಕನ ಪರ ಮಾತನಾಡಿದ್ದಲ್ಲದೇ ಹೆಣ್ಣು ಮಕ್ಕಳ ಜೊತೆ ಅನುಚಿತವಾಗಿ ವರ್ತಿಸಿದ್ದ. ಈ ಕುರಿತು ವೀಡಿಯೋ ಒಂದು ವೈರಲ್ ಆದ ಹಿನ್ನೆಲೆಯಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಪೇದೆಯನ್ನು ಅಮಾನತ್ತು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com