"ಸಾಗರ ಹಾಗೂ ಹೊಸನಗರ ತಾಲ್ಲೂಕುಗಳ ನಿವಾಸಿಗಳು 1950 ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯದ ನಿರ್ಮಾಣಕ್ಕಾಗಿ ತಮ್ಮ ಮನೆ, ಭೂಮಿಯನ್ನು ತ್ಯಾಗ ಮಾಡಿದ್ದಾರೆ. ಅದರ ನಂತರ ರಾಜ್ಯದ ಯಾವುದೇ ಸರ್ಕಾರ ಗ್ರಾಮಸ್ಥರ ಪುನರ್ವಸತಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಅವರನ್ನು ಅರಣ್ಯದ ಅಂಚಿನಲ್ಲಿರಿಸಲಾಗಿದೆ. ಅಲ್ಲದೆ ವರ್ಷಗಳ ನಂತರ , ಗ್ರಾಮಸ್ಥರನ್ನು ಸ್ಥಳಾಂತರಿಸಿದ ಅರಣ್ಯ ಇಲಾಖೆ ಅರಣ್ಯ ಭಾಗವನ್ನು ಮೀಸಲು ಅರಣ್ಯ ಪ್ರದೇಶವಾಗಿ ಪರಿವರ್ತಿಸಿತು. ”ಎಂದು ಸಾಹಿತಿ ನಾ ಡಿಸೋಜ ಹೇಳಿದರು. ಈ ಗ್ರಾಮಸ್ಥರು, ನಂತರ ತಮ್ಮ ಜೀವನೋಪಾಯಕ್ಕಾಗಿ, ಕೃಷಿ ಚಟುವಟಿಕೆಗಳಿಗಾಗಿ ಮರಗಳನ್ನು ಕಡಿದಿದ್ದರು ಮತ್ತು ಅವರನ್ನು ಬಗರ್ ಹುಕುಂ ಕೃಷಿಕರು ಎಂದು ಹೆಸರಿಸಲಾಯಿತು. ಆದರೆ, ಅವರು ವಾಸಿಸುತ್ತಿರುವ ಭೂಮಿಗೆ ಅವರಿಗಿನ್ನೂ ಹಕ್ಕು ಪತ್ರ ಸಿಕ್ಕಿಲ್ಲ. ಎಂದು ಪರಿಸರವಾದಿ ಶಶಿ ಸಂಪಳ್ಳಿ ಹೇಳಿದ್ದಾರೆ. ಶರಾವತಿಯನ್ನು ತಮ್ಮ ಜೀವಸೆಲೆ ಮತ್ತು ಅವರ ಸಂಸ್ಕೃತಿಯ ಒಂದು ಭಾಗವೆಂದು ಪರಿಗಣಿಸುವ ಮಲೆನಾಡಿಗರಿಗೆ ಸರ್ಕಾರದ ಈ ಕ್ರಮ ದೊಡ್ಡ ಹೊಡೆತವಾಗಿದೆ.