ಇದೀಗ ಆಟಿ ರೌಡಿ ಸ್ಕ್ವಾಡ್ ಬಾಕಿ ಉಳಿದಿರುವ ವಾರಂಟ್ ಗಳನ್ನು ಪರಿಶೀಲಿಸಿದಾಗ , ಡಿ'ಸೋಜಾ ಹೆಸರು ಕಾಣಿಸಿಕೊಂಡಿದೆ.ಆತನ ಇರುವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರಿನ ದಕ್ಷಿಣ ಸಹಾಯಕ ಕಮೀಷನರ್ ನೇತೃತ್ವದ ತಂಡ ಅಂತಿಮವಾಗಿ ಗುರುವಾರ , ಡಿ'ಸೋಜಾ ನನ್ನು ಅವನ ಮನೆಯಿಂದ ಬಂಧಿಸಿ ಕರೆದೊಯ್ದಿದೆ.ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಡಿ.ಸಿ.ಪಿ.ಹನುಮಂತಾರಾಯ ಮತ್ತು ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.