"ಪೋಲೀಸ್ ಇನ್ಸ್ ಪೆಕ್ಟರ್ ಹಾಗೂ ಅವರ ತಂಡ ಬಹುದೊಡ್ಡ ಕೆಲಸ ಮಾಡಿದೆ.ಈ ಬಗೆಯ ಕಾರ್ಯ ಜನರಲ್ಲಿ ಪೊಲೀಸ್ ಇಲಾಖೆಯಕುರಿತು ಧನಾತ್ಮಕ ಭಾವನೆಯನ್ನು ಮೂಡಿಸಲಿದೆ.ಡಿ.ಜಿ ಮತ್ತು ಐ.ಜಿ.ಪಿ, ಸಿದ್ದಲಿಂಗಯ್ಯ ಅವರ ಕಾಯಕವನ್ನು ಮೆಚ್ಚಿದ್ದಾರೆ.ಅಲ್ಲದೆ ಅವರಿಗೆ 25,000 ರೂ. ಬಹುಮಾನವನ್ನು ಘೋಷಿಸಿದ್ದಾರೆ.. ನಾನು ಸಿದ್ದಲಿಂಗಯ್ಯ ಮತ್ತು ಡೆಪ್ಯುಟಿ ಇನ್ಸ್ ಪೆಕ್ಟರ್ ವಿನಯ್ ಸೇರಿದಂತೆ ಮಹಿಳೆಯ ಜೀವ ಉಳಿಸಿದ್ದ ತಂಡಕ್ಕೆ 50,000 ರೂ ಬಹುಮಾನ ನೀಡಿದ್ದೇನೆ." ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.