ಇಷ್ಟಾಗುತ್ತಲೇ ರಮ್ಯಾ ನಾಯರ್ ಹಾಗೂ ಆಕೆಯ ತಂದೆ ಕುಂಜಿರಾಮನ್ ತಮ್ಮ ಮೊಬೈಲ್ ಸಂಖ್ಯೆಗಳನ್ನು ಬದಲಿಸಿಕೊಂಡಿದ್ದಾರೆ. ಇದರಿಂದ ಸಂಶಯಗೊಂಡ ಕೃಷ್ಣನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಬಳಿಕ ರಮ್ಯಾ ನಾಯರ್ ಕುಟುಂಬದ ಜತೆ ಮಾತನಾಡಿದಾಗ ಅವರು ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಹಾಗೂ ವಿವಾಘ ನೆರವೇರಿಸಿಕೊಡುವುದಾಗಿ ಮತ್ತೆ ಭರವಸೆ ಇತ್ತಿದ್ದಾರೆ. ಇದಾಗಿ ಫೆ.20ರಂದು ಮತ್ತೆ ಕೃಷ್ಣನ್, ರಮ್ಯಾ ನಾಯರ್ ಮನೆಗೆ ತೆರಳಿದಾಗ ಅವರಾಗಲೇ ಮನೆ ಕಾಲಿ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ. ಆಘಾತಗೊಂಡ ಕೃಷ್ಣನ್ ನಾಯರ್ ಕುಟುಂಬದ ವಿರುದ್ಧ ವಂಚನೆ, ಪಿತೂರಿ ಪ್ರಕರಣವನ್ನು ದಾಖಲಿಸಿದ್ದಾರೆ.