ಹೀಗೆ ಕೃಷಿ ಕೆಲಸ ಕಷ್ಟ, ಲಾಭ ಬರುವುದಿಲ್ಲ, ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂದು ಕಳೆದ ದಶಕದಿಂದೀಚೆಗೆ ಕೃಷಿ, ವ್ಯವಸಾಯವನ್ನು ತೊರೆದವರು ಅದೆಷ್ಟೋ ಮಂದಿ. ಕೆಲವು ಸಣ್ಣ ವ್ಯವಸಾಯಗಾರರು ಪಟ್ಟಣ, ನಗರಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹಲವು ಯುವಕರು ನಗರ ಪ್ರದೇಶಗಳಿಗೆ ಉದ್ಯೋಗವನ್ನರಸಿ ವಲಸೆ ಹೋಗುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ಇಂದು ಮನೆಗಳು ವೃದ್ಧಾಶ್ರಮಗಳಾಗುತ್ತಿವೆ.