ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಜಯಮಾಲಾ, ಸರಳ ಸಜ್ಜನ ಸಚಿವರಾಗಿದ್ದ ಶಿವಳ್ಳಿಯವರು ತಮ್ಮ ಆತ್ಮೀಯ ಸಹೋದ್ಯೋಗಿಯಾಗಿದ್ದರು. ಅವರ ಅಕಾಲಿಕ ನಿಧನ ದಿಗ್ಭ್ರಾಂತಿ ಮೂಡಿಸಿದೆ. ಮಿತಭಾಷಿಯಾಗಿದ್ದ ಅವರು ಉತ್ತರ ಕರ್ನಾಟಕದ ಹಿರಿಯ ಜನಪ್ರತಿನಿಧಿ, ಪೌರಾಡಳಿತ ಸಚಿವರಾಗಿ ನಾಡಿನ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜನಸಾಮಾನ್ಯರ ದುಃಖ-ದುಮ್ಮಾನಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು, ಕಾಂಗ್ರೆಸ್ ಪಕ್ಷದ ಬೆಳವಣಿಗೆಗೂ ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ಅನುಭವಿ ಮತ್ತು ನಿಷ್ಠಾವಂತ ಮುಖಂಡರನ್ನು ಕಳೆದುಕೊಂಡಿರುವುದರಿಂದ ಸರ್ಕಾರಕ್ಕೆ, ಪಕ್ಷಕ್ಕೆ ಹಾಗೂ ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ- ಸದ್ಗತಿ ಸಿಗುವಂತಾಗಲಿ ಎಂದು ಸಂತಾಪ ಸೂಚಿಸಿದ್ದಾರೆ.