ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ತೆರಳುತ್ತಿದ್ದ ಬಳ್ಳಾರಿಯ ಭಕ್ತರ ಮೇಲೆ ಲಾರಿ ಹರಿದು ಮೂವರ ಸಾವು

ಯುಗಾದಿ ಹಬ್ಬದ ದಿನ ಶ್ರೀಶೈಲ್ ಮಲ್ಲಿಕಾರ್ಜುನನ ದರ್ಶನ ಪಡೆಯಲೆಂದು ಪಾದಯಾತ್ರೆಯಲ್ಲಿ ತೆರಳಿದ್ದ ಭಕ್ತರ ಮೇಲೆ ಲಾರಿ ಹರಿದು ಮೂವರು ಮೃತಪಟ್ಟಿರುವ ಘಟನೆ...
ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ತೆರಳುತ್ತಿದ್ದ ಬಳ್ಳಾರಿಯ ಭಕ್ತರ ಮೇಲೆ ಲಾರಿ ಹರಿದು ಮೂವರ ಸಾವು

ಬಳ್ಳಾರಿ: ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯಲು ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಬಳ್ಳಾರಿಯ ಹೊಸ ಯರಗುಡಿ ಗ್ರಾಮದ ಮೂವರ ಮೇಲೆ ಇಂದು ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದೆ.
 
ಪ್ರತಿ ವರ್ಷದಂತೆ ಗ್ರಾಮದಿಂದ 41 ಜನರ ತಂಡ ನಿನ್ನೆ ಶ್ರೀಶೈಲ ಪಾದಯಾತ್ರೆ ಆರಂಭಿಸಿತ್ತು. ರಾತ್ರಿ ಮಲಗಿ, ಬೆಳಗಿನ ಜಾವ ಮೂರು ಗಂಟೆಯಿಂದ ಪಾದಯಾತ್ರೆ ಆರಂಭಿಸಿದ ಇವರ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
 
ಮೃತಪಟ್ಟವರನ್ನು ಗಡ್ಡಂ ಕುಲಗಯ್ಯ (29), ಜಿ.ಪೋತಲಿಂಗ (22) ಮತ್ತು ಜಿ.ಶೇಖಪ್ಪ (18) ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಪೋತಲಿಂಗ ಮತ್ತು ದೇವೇಂದರ ರೆಡ್ಡಿ ಅವರ ಕಾಲುಗಳು ತುಂಡಾಗಿವೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com