ಕೊಡವೂರು ಕಂಬಳಕಟ್ಟದವರಾದ ಶೈಲೇಶ್ ಸುರೇಂದ್ರ ಉಪಾಧ್ಯಾಯ, ಲಕ್ಷ್ಮಿ ಉಪಾಧ್ಯಾಯ ಅವರ ಪುತ್ರ. ಇವರು ನಾಲ್ಕನೇ ವರ್ಷದ ವೇದಾದ್ಯಯನದಲ್ಲಿ ತೊಡಗಿಕೊಂಡಿದ್ದು ಇವರ ಸೋದರ ವಿಶ್ವೇಶ ಉಪಾಧ್ಯಾಯ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಅಧ್ಯಯನ ಮಾಡುತ್ತಿದ್ದಾರೆ.ಸನ್ಯಾಸ ದೀಕ್ಷೆ ಪಡೆದ ನಂತರ ಪಲಿಮಾರು ಶ್ರೀಗಳ ಬಳಿ ವಿದ್ಯಾಭ್ಯಾಸ ಮುಂದುವರಿಸುವ ತೀರ್ಮಾನಕ್ಕೆ ಶೈಲೇಶ್ ಬಂದಿದ್ದಾರೆ ಎನ್ನಲಾಗಿದೆ.