ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ 2,023 ಖಾಸಗಿ ಬಸ್ ಗಳ ಮೇಲೆ ಕೇಸು ದಾಖಲಿಸಿ 1.35 ಕೋಟಿ ದಂಡ ವಿಧಿಸಿದ್ದೇವೆ ಎಂದು ಇಕ್ಕೇರಿ ಹೇಳಿದರು. ಬಸ್ ದರ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಿದ ಇಕ್ಕೇರಿ, 2014ರಲ್ಲಿ ಬಸ್ ದರವನ್ನು ಪರಿಷ್ಕರಣೆ ಮಾಡಿದ್ದೇವೆ. ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಕಾರ್ಯನಿರ್ವಾಹಕರು ಶೇಕಡಾ 18ರಷ್ಟು ಬಸ್ ದರ ಹೆಚ್ಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಬೇಡಿಕೆ ರಾಜ್ಯ ಸರ್ಕಾರದ ಮುಂದಿದೆ. ಅಂತರಾಜ್ಯ ಬಸ್ ಟಿಕೆಟ್ ದರ ಪರಿಷ್ಕರಣೆ ಕೂಡ ಮನವಿ ಹಂತದಲ್ಲಿದೆ. ಚುನಾವಣೆ ನಂತರವೇ ತೀರ್ಮಾನ ತೆಗೆದುಕೊಳ್ಳಬಹುದು ಸರ್ಕಾರ ಎಂದರು.