ರಾಯಚೂರು ವಿದ್ಯಾರ್ಥಿ ಮಧು ಸಾವಿನ ಪ್ರಕರಣ: ಹಿಂಸೆ ನೀಡಿರುವುದು ವಾಟ್ಸಾಪ್ ಸಂದೇಶದಿಂದ ಬಹಿರಂಗ

ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಮತ್ತೊಂದು ಪ್ರಮುಖ ವಿಷಯ ಬಹಿರಂಗವಾಗಿದೆ, ಮೃತ ಮಧುಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಮತ್ತೊಂದು ಪ್ರಮುಖ ವಿಷಯ ಬಹಿರಂಗವಾಗಿದೆ, ಮೃತ ಮಧುಗೆ ಕಿರುಕುಳ ನೀಡಿರುವ ವಿಷಯ ವಾಟ್ಸಾಪ್ ಸಂದೇಶದಿಂದ ತಿಳಿದು ಬಂದಿದೆ.
ನನ್ನ ತಂಗಿಗೆ ಮೆಸೇಜ್ ಗಳ ಮೂಲಕ ಚಿತ್ರಹಿಂಸೆ ನೀಡುತ್ತಿದ್ದರೆಂದು ಮೃತ ವಿದ್ಯಾರ್ಥಿನಿ ಸಹೋದರಿ ತಿಳಿಸಿದ್ದಾರೆ, 
ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಏ.13ರಂದು  ನಾಪತ್ತೆಯಾಗಿದ್ದಳು, ಎಪ್ರಿಲ್ 15 ರಂದು ಶವವಾಗಿ ಪತ್ತೆಯಾಗಿದ್ದಾಗಿನಿಂದ ಇದು ರಾಜ್ಯಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣವನ್ನು ತನಿಖೆಗೆ ಸಿಐಡಿಗೆ ವಹಿಸಲಾಗಿತ್ತು.
ಬಂಧಿತ ಆರೋಪಿ ಸುದರ್ಶನ್ ಯಾದವ್ ಗೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com