ಏಪ್ರಿಲ್ 26 ರ ಶುಕ್ರವಾರ ಸ್ವಾಮಿ ಸುಂದರ್ ಮೂರ್ತಿ ಎಂಬ ಹೆಸರಿನ ಲಾರಿ ಡ್ರೈವರ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಗೋವಾ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಉಗ್ರರ ದಾಳಿ ನಡೆಯಬಹುದು. ರೈಲಿನಲ್ಲಿ ಸ್ಫೋಟ ಸಂಭವಿಸಬಹುದು. 19 ಜನ ಉಗ್ರರು ತಮಿಳುನಾಡಿನ ರಾಮನಾಥ ಪುರಂಗೆ ಬಂದಿದ್ದಾರೆಂದು ಮಾಹಿತಿ ನೀಡಿದ್ದರು. ಈ ಸಂಬಂಧ ಕರ್ನಾಟಕದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದು ತುರ್ತು ವಿಷಯ. ಭಾರತದ 8 ರಾಜ್ಯಗಳ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಏಪ್ರಿಲ್ 27 ರಂದು ಅಕ್ಕಪಕ್ಕ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ನೀಲಮಣಿ ರಾಜು ಅವರು ಪತ್ರ ಬರೆದಿದ್ದರು.