ಬೆಂಗಳೂರಿನಲ್ಲಿ ಬಾಲಕಿಯರಿಬ್ಬರ ಶಂಕಾಸ್ಪದ ಸಾವು!

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ರಾಜಗೋಪಾಲನಗರದ ಸಂಪ್ ಗೆ ಬಿದ್ದು 12 ವರ್ಷದ ಜ್ಯೋತಿ ಮೃತಪಟ್ಟಿದ್ದು ಈಕೆಯ ಸಾವಿನ ಹಿಂದೆ ವಾಮಾಚಾರದ ಆರೋಪ ಕೇಳಿಬಂದಿದೆ. ಮತ್ತೊಂದು ಪ್ರಕರಣದಲ್ಲಿ ಬಾಗಲಗುಂಟೆಯ 11 ವರ್ಷದ ಪೂಜಾ ಎಂಬಾಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾಗಿದೆ.
ಅನ್ಭುಕುಮಾರ್ 5 ತಿಂಗಳ ಹಿಂದೆ ನಗರದಲ್ಲಿ ಹೊಸ ಮನೆ ಕಟ್ಟಿದ್ದ. ಹೊಸ ಮನೆಯಲ್ಲಿ ಪೂಜೆ ಮಾಡುವ ಸಂದರ್ಭ ನರ ಬಲಿ ಕೊಡಬೇಕು ಎಂದು ಬೇರೆಯವರ ಬಳಿ ಈ ಹಿಂದೆ ಹೇಳಿಕೊಂಡಿದ್ದ. ಆದರೆ, ಸ್ಥಳೀಯರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಇದೀಗ ಬಾಲಕಿ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. 
ಈ ಸಂಬಂಧ ಅನ್ಭುಕುಮಾರ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com