ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಅನ್ನಿ ಕೆ ಜೊಯ್, ವಾಸಸ್ಥಾನ ಸ್ಥಳಾಂತರ ಮಾಡುವಂತೆ ಇದುವರೆಗೆ ನೊಟೀಸ್ ಜಾರಿ ಮಾಡಿಲ್ಲ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.ಜೂನ್ ನಿಂದ ಆಗಸ್ಟ್ ವರೆಗೆ ಮಾನ್ಸೂನ್ ನಲ್ಲಿ ಅಧಿಕಾರಿಗಳು ಜನರ ಸಹಾಯಕ್ಕೆ ಯಾವುದೇ ಕ್ಷಣದಲ್ಲಿಯಾದರೂ ಲಭ್ಯವಿರುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಈ ಸಮಯದಲ್ಲಿ ರಜೆಗಳಿರುವುದಿಲ್ಲ ಎಂದು ಹೇಳಿದರು.