ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಕುಂದ್ರಳ್ಳಿ ಗ್ರಾಮದ ಕಥೆ. ಇಲ್ಲಿ ಸುಮಾರು 2 ಸಾವಿರದ 400 ಜನಸಂಖ್ಯೆಯಿದ್ದು ಇಲ್ಲಿನ ಮಹಿಳೆಯರು ನೀರಿಗಾಗಿ ಜಗಳ, ಕದನ ಮಾಡುವುದು ಸಾಮಾನ್ಯ ದೃಶ್ಯವಾಗಿದೆ. ನಿಗದಿತವಾಗಿ ಗ್ರಾಮಕ್ಕೆ ನೀರು ಒದಗಿಸುತ್ತೇವೆ ಎಂದು ಇಲ್ಲಿಗೆ ಭೇಟಿ ನೀಡಿದ ಹಲವು ಸರ್ಕಾರಿ ಅಧಿಕಾರಿಗಳು ಹೇಳಿದ್ದರು. ಆದರೆ ಅವರು ಯಾವತ್ತೂ ತಮ್ಮ ಮಾತನ್ನು ಉಳಿಸಿಕೊಂಡಿಲ್ಲ.