ಪೂಜೆ, ಪುನಸ್ಕಾರ ಮಾಡಿ ದೇವರನ್ನು ಒಲಿಸಿಕೊಳ್ಳುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮದ ಗಡಿಯಲ್ಲಿರುವ ದೊಡ್ಡ ಬಂಡೆ ಕಲ್ಲೊಂದನ್ನು ಉರುಳಿಸಿ ತಂದು ಮತ್ತೊಂದು ಗ್ರಾಮಕ್ಕೆ ಅಡ್ಡಲಾಗಿ ಇಟ್ಟಿದ್ದಾರೆ.ಬಂಡೆಯನ್ನು ಉರುಳಿಸಿದರೆ ಮಳೆ ಬರುತ್ತದೆ ಎಂಬ ಮೂಢನಂಬಿಕೆ ಇಲ್ಲಿನ ಗ್ರಾಮಸ್ಥರದ್ದು. ಕಳೆದ ಭಾನುವಾರ ಬೆಳಗ್ಗೆ ಬೆಳ್ಳಿಬಟ್ಟಲು ಗ್ರಾಮಸ್ಥರು ಈ ಸಂಪ್ರದಾಯವನ್ನು ತರಾತುರಿಯಿಂದ ಮಾಡಿ ಮುಗಿಸಿದ್ದಾರೆ.