ಹಾಸನ: ಎದೆ ಹಾಲು ಕುಡಿಯುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ..ಎದೆ ಹಾಲು ಶ್ವಾಸನಾಳಕ್ಕೆ ಹೋಗಿ ಅಸ್ವಸ್ಥಗೊಂಡಿದ್ದ ಮಗು ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ..ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ರಂಜಿತ, ಲೋಕೇಶ್ ದಂಪತಿಯ ಗಂಡು ಮಗು ಇಂದು ಮುಂಜಾನೆ ತಾಯಿ ಎದೆ ಹಾಲು ನೆತ್ತಿಗೆ ಹತ್ತಿ ಉಸಿರಾಟ ಸಾಧ್ಯವಾಗದೆ ಅಸ್ವಸ್ಥಗೊಂಡಿತ್ತು..ಗಾಬರಿಯಾದ ಪೋಷಕರು ಮಗುವನ್ನು ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಹಾಸನ: ಎದೆ ಹಾಲು ಕುಡಿಯುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ..ಎದೆ ಹಾಲು ಶ್ವಾಸನಾಳಕ್ಕೆ ಹೋಗಿ ಅಸ್ವಸ್ಥಗೊಂಡಿದ್ದ ಮಗು ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ..ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ರಂಜಿತ, ಲೋಕೇಶ್ ದಂಪತಿಯ ಗಂಡು ಮಗು ಇಂದು ಮುಂಜಾನೆ ತಾಯಿ ಎದೆ ಹಾಲು ನೆತ್ತಿಗೆ ಹತ್ತಿ ಉಸಿರಾಟ ಸಾಧ್ಯವಾಗದೆ ಅಸ್ವಸ್ಥಗೊಂಡಿತ್ತು..ಗಾಬರಿಯಾದ ಪೋಷಕರು ಮಗುವನ್ನು ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ