ಬೆಂಗಳೂರು: ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಬೆಂಗಳೂರು ರಾಜಾಜಿನಗರದ ದೇವಕಮ್ಮನವರಿಗೆ 8 ಮಕ್ಕಳಿದ್ದೂ ಏಕಾಂಗಿ ಬದುಕು ನಡೆಸುತ್ತಾ ಪುಟ್ಟ ಅಂಗಡಿಯೊಂಡರಲ್ಲಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆಂಬ ಅವರ ನೋವಿನ ಕಥೆಯನ್ನು "ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ಹಾಗೂ ಅದರ ಸಮೂಹದ ಆನ್ ಲೈನ್ ನ್ಯೂಸ್ ವೆಬ್ ಸೈಟ್ "ಕನ್ನಡಪ್ರಭ ಡಾಟ್ ಕಾಂ" ವರದಿ ಮಾಡಿದ್ದವು. ಇದೀಗ ಆ ವರದಿಯ ಪರಿಣಾಮವಾಗಿ 85 ವರ್ಷದ ದೇವಕಮ್ಮನವರಿಗೆ ಒಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿ, ಓರ್ವ ಇಂಜಿನಿಯರ್ ಹಾಗೂ ಇನ್ನೋರ್ವ ಬಹರೈನ್ ಮೂಲದ ಪರೋಪಕಾರಿ ವ್ಯಕ್ತಿಗಳು ಸೇರಿ ಅಂಗಡಿ ಹಾಗೂ ಮನೆ ನಿರ್ಮಿಸಿಕೊಳ್ಳಲು ಸಹಾಯ ಮಾಡಲು ಮುಂದಾಗಿದ್ದಾರೆ