ನಗರದಲ್ಲಿ ಇಂದು ಗಾಂಧಿ ಭವನದ ಆವರಣದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ‘ಸಬ್ ಕೋ ಸನ್ಮತಿ ದೇ ಭಗವಾನ್’ ಮೌನ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಗೋಡ್ಸೆ ಗಾಂಧಿ ಮಾತ್ರವಲ್ಲದೆ, ಸತ್ಯವನ್ನೂ ಕಗ್ಗೊಲೆ ಮಾಡಿದ. ಆದರೆ ಕೆಲವರು ತಪ್ಪನ್ನು ಸಮರ್ಥನೆ ಮಾಡುತ್ತಾರೆ. ಇನ್ನೂ ಸಮಾಜದಲ್ಲಿ ವಿಷ ಹರಡುವುದನ್ನೇ ಬಿಜೆಪಿ ಆರ್ ಎಸ್ಎಸ್ ಕಾಯಕ ಮಾಡಿಕೊಂಡಿದೆ. ಗೋಡ್ಸೆ ಪುಸ್ತಕ ಬಂದಿದ್ದು, ಅದರಲ್ಲಿ ಆತ ಗಾಂಧಿ ಅವರು ಮಹಮ್ಮದೀಯರ ಪರವಾಗಿ ಇರುವುದರಿಂದ ಕೊಲೆ ಮಾಡಿದೆ ಎನ್ನುತ್ತಾರೆ. ಆದರೆ, ಇದರಲ್ಲಿ ಸತ್ಯ ಇಲ್ಲ ಎಂದ ಅವರು, ಯಾರೂ ಸಹ ಇತಿಹಾಸವನ್ನು ತಿರುಚುವುದು ಸರಿಯಲ್ಲ ಎಂದರು.