ತಾಳಗುಪ್ಪ-ಬೆಂಗಳೂರು ರೈಲ್ವೆ ಇಂಜಿನ್ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು

ಮೈಸೂರು ಲೋಕೋಮೋಟಿವ್, ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ....
ತಾಳಗುಪ್ಪ-ಬೆಂಗಳೂರು ರೈಲ್ವೆ ಇಂಜಿನ್ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
ತಾಳಗುಪ್ಪ-ಬೆಂಗಳೂರು ರೈಲ್ವೆ ಇಂಜಿನ್ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
ಶಿವಮೊಗ್ಗ: ಮೈಸೂರು ಲೋಕೋಮೋಟಿವ್, ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ರೈಲು ಸೋಮವಾರ ರಾತ್ರಿ ಭದ್ರಾವತಿ ನಿಲ್ದಾಣದಲ್ಲಿ ಸುಮಾರು ಎರಡು ಗಂಟೆಗಳಿಗೆ ಹೆಚ್ಚು ಕಾಲ ನಿಂತಿರುವ ಘಟನೆ ವರದಿಯಾಗಿದೆ ರೈಲು ಸಂಖ್ಯೆ - 16228 ನ ಇಂಜಿನ್ ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿದ್ದಾಗಿ ಹೇಳಲಾಗಿದೆ.
ರಾತ್ರಿ 11ಕ್ಕೆ ಶಿವಮೊಗ್ಗದಿಂದ ಹೊರಟಿದ್ದ ರೈಲು ಭದ್ರಾವತಿಗೆ ತಲುಪುವಾಗ ಬೆಂಕಿ ಕಾಣಿಸಿದೆ.ತಕ್ಷಣ ಎಚ್ಚೆತ್ತ ರೈಲ್ವೆ ಇಲಾಖೆ ಅಗ್ನಿಶಾಮಕದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದೆ.
ಬೆಂಕಿ ಹತ್ತಿದ್ದ ಇಂಜಿನ್ ಬದಲಿಸಿ ಬೇರೆ ಇಂಜಿನ್ ಅಳವಡಿಸಿದ ನಂತರ ರೈಲು ರಾತ್ರಿ 1.40ಕ್ಕೆ ಭದ್ರಾವತಿಯಿಂದ ಬೆಂಗಳೂರಿನತ್ತ ಹೊರಟಿದೆ. 
ಘಟನೆಯಲ್ಲಿ ಯಾವ ಪ್ರಯಾಣಿಕರಿಗೂ ಗಾಯಗಳಾಗಿಲ್ಲ, ಯಾವುದೇ ಸಾವು ನೋವು ಸಂಭವಿಸಿಲ್ಲ.
ಬೆಂಕಿ ಆಕಸ್ಮಿಕವಾದ ಕಾರಣ ಸುಮಾರು ಎರಡೂ ವರೆ ಗಂಟೆಗಳ ಕಾಲ ತಡವಾಗಿ ರೈಲು ಬೆಂಗಳುರು ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com