ರಾಜ್ಯದ 35 ಲಕ್ಷ ರೈತರ 45 ಸಾವಿರ ಕೋಟಿ ರೂಪಾಯಿ ಬೆಳೆಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಳೆದ ವರ್ಷ ಘೋಷಿಸಿದ್ದಾಗ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ತಾವು ಪಡೆದ ಸಾಲದ ವಿವರಗಳನ್ನು ಆಧಾರ್ ಕಾರ್ಡು, ಬ್ಯಾಂಕು ಖಾತೆ ವಿವರ ಮತ್ತು ಭೂಮಿಯ ಆರ್ ಟಿಸಿಯ ನಕಲು ಪ್ರತಿಯೊಂದಿಗೆ ನೀಡುವಂತೆ ರೈತರಿಗೆ ಸರ್ಕಾರದಿಂದ ಪತ್ರ ಕೂಡ ಬಂದಿತ್ತು.