ಶ್ರೀನಾಥ್ ಎಂಬುವವರು ಮಗನ ಶಾಲಾ ಶುಲ್ಕ ಹಾಗೂ ಪುಸ್ತಕ ಖರೀದಿಗಾಗಿ ಆವಲಹಳ್ಳಿಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ 48 ಸಾವಿರ ರೂ. ಹಣ ಡ್ರಾ ಮಾಡಿದ್ದರು. ನಂತರ ಪತ್ನಿ, ಮಗನೊಂದಿಗೆ ಊಟ ಮಾಡಲು ಓಲ್ಡ್ ಮದ್ರಾಸ್ ರಸ್ತೆಯ ಭಟ್ಟರಹಳ್ಳಿ ಉಡುಪಿ ಗಾರ್ಡನ್ ಹೋಟೆಲ್ ತೆರಳುವಾಗ ಡ್ರಾ ಮಾಡಿದ ಹಣವನ್ನ ತಮ್ಮ ಆಕ್ಟೀವಾ ಬೈಕ್ ನ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ಈ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.