ಹೋಟೆಲ್ ಉದ್ಯಮಿಯಾಗಿದ್ದ ಚಂದ್ರಶೇಖರ್ ಶನಿವಾರ ಹೋಟೆಲ್ ಮುಚ್ಚಿದ ನಂತರ ಪತ್ನಿಯ ಮನೆಯಿದ್ದ ಕಾಲ್ತೋಡಿಗೆ ತೆರಳುತ್ತಿದ್ದರು. ಆಗ ಮಾವಿನಕಾರು ಎಂಬಲ್ಲಿ ಕಾಡುಹಂದಿ ಕಾರಿಗೆ ಅಡ್ಡ ಬಂದಿದೆ. ಹಂದಿಯನ್ನು ತಪ್ಪಿಸಲು ಮುಂದಾದ ಚಂದ್ರಶೇಖರ್ ಗೆ ಕಾರಿನ ಮೇಲಿನ ನಿತ್ಯಂತ್ರಣ ತಪ್ಪಿದೆ. ಕಾಡುಹಂದಿ ಕಾರಿಗೆ ಡಿಕ್ಕಿಯಾದರೆ ಕಾರು ಹೊಂಡಕ್ಕೆ ಇಳಿದು ಮರವೊಂದಕ್ಕೆ ಡಿಕ್ಕಿಯಾಗಿದೆ.