ಬೆಂಗಳೂರು: ಮದ್ಯದ ನಶೆಯಲ್ಲಿರುವಾಗಲೇ ಮಾಜಿ ರೌಡಿಯೊಬ್ಬನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬ್ವೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಹಳೆಯ ರೌಡಿ ವಿಜಯ್ ಅಲಿಯಾಸ್ ವಿಜಿ (29) ಕೊಲೆಯಾಗಿದ್ದಾನೆ. ಹತ್ಯೆಗೆ ಕಾರಣಗಳೇನು ಎಂಬುದು ಇನ್ನೂ ತಿಳಿದಿಲ್ಲ.ಗೊರಗುಂಟೆಪಾಳ್ಯ ನಿವಾಸಿಯಾದ ವಿಜಿ ತನ್ನ ಕುಟುಂಬದೊಡನೆ ವಾಸವಿದ್ದನೆನ್ನಲಾಗಿದೆ.
ರಾತ್ರಿ ಊಟಕ್ಕೆಂದು ವಿಜಯ್ ತನ್ನ ಮೂರು-ನಾಲ್ಕು ಸ್ನೇಹಿತರೊಂದಿಗೆ ಕಾರ್ ನಲ್ಲಿ ಹೋಟೆಲ್ ಗೆ ತೆರಳಿದ್ದಾನೆ. ಆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಕಾರಿನಲ್ಲಿದ್ದಂತೆಯೇ ಜಗಳ ತಾರಕಕ್ಕೇರಿದ್ದು ಚಾಕುವಿನಿಂದ ವಿಜಯ್ ಕುತ್ತಿಗೆಗೆ ಇರಿದಿದ್ದಾರೆ.
ಬಳಿಕ ಕಾರಿನಿಂದಿಳಿದು ಅವರಿಂದ ತಪ್ಪಿಸಿಕೊಂಡು ಓಡಿದ್ದ ವಿಜಯ್ ನನ್ನು ಹಿಂಬಾಲಿಸಿದ ಕೊಲೆಗಡುಕರು ಯಶವಂತಪುರ ಮಸೀದಿ ಬಳಿಯ ಬಜಾಜ್ ಸರ್ಕಲ್ ಸಮೀಪ ಮತ್ತೆ ಕುತ್ತಿಗೆಗೆ ಬಲವಾಗಿ ಚಾಕು ಚುಚ್ಚಿ ಹತ್ಯೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಯಶವಂತಪುರ ಪೋಲೀಸರು ಆಗಮಿಸಿ ಪರಿಶೀಲಿಸಿದ್ದು ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕೊಲೆಗಡುಕರ ಪತ್ತೆಗೆ ವಿಶೇಷ ತಂಡ ರಚನೆಯಾಗಿದ್ದು ಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ತಿಳಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರಾಥಮಿಕ ತನಿಖೆಯಿಂದ ವಿಜಯ್ ಕಿರಿಕ್ ಮಂಜ ಜಗಳವಾಗಿದ್ದು ಅದೇ ಕಾರಣಕ್ಕೆ ಮುಖ್ಯ ಆರೋಪಿ ಮಂಜನೇ ಕೊಲೆ ಮಾಡಿದ್ದಾನೀಂದು ತಿಳಿದುಬಂದಿದೆ.