ಬೆಂಗಳೂರು: ರಾಜ್ಯಸರ್ಕಾರದ ನೌಕರರಿಗೆ ನಾಲ್ಕನೇ ಶನಿವಾರವೂ ಸಾರ್ವತ್ರಿಕ ರಜೆ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ಆದರೆ, ಕನಕ ಜಯಂತಿ, ಬಸವ ಜಯಂತಿ, ಈದ್ ಮಿಲಾದ್, ಮಹಾವೀರ ಜಯಂತಿ ಮತ್ತಿತರ 8 ಕ್ಕೂ ಅಧಿಕ ವಿವಿಧ ಜಯಂತಿ ಆಚರಣೆ ಸಂದರ್ಭದಲ್ಲಿ ಸಿಗುತ್ತಿದ್ದ ಸಾಂದರ್ಭಿಕ ರಜೆಗಳನ್ನು ರದ್ದು ಪಡಿಸಿದೆ.
ದೀಪಾವಳಿ ಹಬ್ಬದ ನಿಮಿತ್ತ ನೀಡುವ ರಜೆಗಳಲ್ಲಿ 1ನೇ ಮತ್ತು 3 ನೇ ದಿನ ನೀಡುವ ಬದಲು 1 ನೇ ಮತ್ತು 2 ನೇ ದಿನ ನೀಡಲು ನಿರ್ಧರಿಸಲಾಗಿದೆ.
Advertisement