ಪ್ರಾಧಿಕಾರದ ಸೂಚನೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ತಮಿಳುನಾಡಿಗೆ ನೀರು ಹರಿಸಲು ತಕರಾರು ಇಲ್ಲ. ಮುಂಗಾರಿನಲ್ಲಿ ಒಳಹರಿವು ಹೆಚ್ಚಾಗುವ ವಿಶ್ವಾಸವಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾದರೆ ಸರ್ವಪಕ್ಷಗಳ ಸಭೆ ನಡೆಸಿ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯ ಹಾಗೂ ನ್ಯಾಯಾಲಯದ ಹಿತ ಎರಡನ್ನೂ ಪರಿಗಣಿಸಲಾಗುವುದು ಎಂದರು.