ಬಾಗಲಕೋಟೆ: ಮತಾಂತರಕ್ಕೆ ಪ್ರಚೋಜಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.
ಲಂಬಾಣಿ ಜನಾಂಗದ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ತುಕಾರಾಮ ರಾಠೋಡ ಎಂಬಾತ ಮತಾಂತರಕ್ಕೆ ಯತ್ನಿಸುತ್ತಿದ್ದ, ಅಲ್ಲದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣದ ನೀಡುವ ಆಮಿಷ ಸಹ ಒಡ್ಡಿದ್ದ. 35ಕ್ಕೂ ಹೆಚ್ಚು ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ಒಂದೆಡೆ ಕೋಣೆಯೊಳಗೆ ಸೇರಿಸಿ ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದ.
ಮತಾಂತರ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಮುದಾಯದ ಮುಖಂಡರು, ಹಿಂದೂ ಪರ ಸಂಘಟನೆ ಮುಖಂಡರು ಆತನನ್ನು ಮನೆಯಿಂದ ಹೊರಗೆ ಕರೆತಂದು ಥಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ನವನಗರದ ಪೊಲೀಸರು ಪರಿಶೀಲನೆ ನಡೆಸಿದರು. ವಿಚಿತ್ರ ಎಂದರೆ ತುಕಾರಾಮ ವೃತ್ತಿಯಲ್ಲಿ ಡಿಆರ್ ಪೊಲೀಸ್ ಪೇದೆ ಎನ್ನುವುದು ತಿಳಿದುಬಂದಿದೆ.
Advertisement