ಬೆಂಗಳೂರು: ಪೂರ್ವಾಗ್ರಹಪೀಡಿತ, ತಿರಸ್ಕಾರ ಮನೋಭಾವವೇ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ ಪ್ರೀತಿಯಿಂದ ಒಪ್ಪಿ ಅಪ್ಪಿಕೊಳ್ಳುವ ಸಂಸ್ಕೃತಿ ಕಾಣದಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ, ಸಿನಿಮಾ ಸೇರಿದಂತೆ ಅನೇಕ ಕಲೆಗಳು ನಶಿಸುವ ಹಂತಕ್ಕೆ ತಲುಪಿವೆ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ವಿಷಾದಿಸಿದ್ದಾರೆ.
ನಗರದ ವಾಡಿಯಾ ಸಭಾಂಗಣದಲ್ಲಿಂದು ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 5 ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಎಂಬ ಶಬ್ದವೇ ಬಹಳ ಕ್ಲಿಷ್ಟಕರವಾದದ್ದು, ಅನೇಕ ವಿದ್ವಾಂಸರು ಬರೆದ ಲೇಖನಗಳು, ಕಾದಂಬರಿಗಳು, ಓದುಗರಿಂದ ತಿರಸ್ಕರಿಸಲ್ಪಟ್ಟಿವೆ. ಇದೊಂದು ವಿಪರ್ಯಾಸ. ಯಾವುದೇ ಲೇಖನ, ಕಾದಂಬರಿಗಳನ್ನು ಸತತವಾಗಿ ಅಧ್ಯಯನ ಮಾಡಿ ವಿಮರ್ಶೆ ಮಾಡಿದ ನಂತರ ಆ ಕೃತಿಯ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದರು.
Advertisement