ಬೆಂಗಳೂರು: ಅಯೋಧ್ಯೆ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಬಗ್ಗೆ ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್ ರೈ ಸ್ವಾಗತಿಸಿದ್ದಾರೆ.
"ಅಯೋಧ್ಯೆಯಲ್ಲಿಯೇ ಮಂದಿರ ಹಾಗೂ ಮಸೀದಿ ಎರಡು ನಿರ್ಮಾಣವಾಗುತ್ತಿದೆ. ಈಗಾಗಲೇ ಆ ಜಾಗದ ಸುತ್ತಲೂ ಸಾಕಷ್ಟು ಪ್ರಾಣ ಹಾನಿಯಾಗಿದೆ. ಮಾನವ ಜೀವನವು ಅಮೂಲ್ಯವಾದದ್ದು, ನಾವು ಮತ್ತಷ್ಟು ಹಿಂಸೆ ಹಾಗೂ ಪ್ರಚೋದನೆಗೆ ಒಳಗಾಗಿ ಗಲಾಟೆ ಮಾಡುವುದನ್ನು ನಿಲ್ಲಿಸೋಣ" ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಜೀವನ ಅಮೂಲ್ಯವಾದುದು. ಮಾನವ ಜೀವನದತ್ತ ಗಮನ ಹರಿಸೋಣ, ದಯವಿಟ್ಟು ಯಾವುದೇ ಅನ್ಯಾಯ ಮಾಡಬೇಡಿ. ಜೀವಗಳಿಗೆ ಬೆಲೆ ಕೊಡಿ ಎಂದು ಹೇಳಿದ್ದಾರೆ.
Advertisement