ಬೆಂಗಳೂರು: ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶ್ರೀನಿವಾಸ ನಗರದ 11ನೇ ಮೈನ್ ನಲ್ಲಿ ನಡೆದಿದೆ.
20 ವರ್ಷದ ಸುದರ್ಶನ್ ಕೊಲೆಯಾದಾತ. ಸುದರ್ಶನ್ 10 ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ.
ಮೃತ ಸುದರ್ಶನ್, ಬ್ಯಾಟರಾಯನಪುರ, ಗಿರಿನಗರ , ಹನುಮಂತನಗರ ಠಾಣೆಗಳಲ್ಲಿ ಕಳ್ಳತನ , ಸುಲಿಗೆ ಇತ್ಯಾದಿ ಪ್ರಕರಣಗಳಲ್ಲಿ ಬೇಕಾಗಿದ್ದವನು.
Advertisement