ಕಾರು ರಿವರ್ಸ್ ತೆಗೆದಾಗ ಕಂದಮ್ಮನ ಪ್ರಾಣವೇ ಹೋಯ್ತು!

ಡಸ್ಟರ್ ಕಾರು ರಿವರ್ಸ್​​​​ ತೆಗೆಯುವ ಸಂದರ್ಭದಲ್ಲಿ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾಳೆ.
ಕಾರು ರಿವರ್ಸ್ ತೆಗೆದಾಗ ಕಂದಮ್ಮನ ಪ್ರಾಣವೇ ಹೋಯ್ತು!

ಚಾಮರಾಜನಗರ: ಕಾರು ರಿವರ್ಸ್ ತೆಗೆಯುವ ವೇಳೆ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಗು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಸತ್ತೇಗಾಲ ಹ್ಯಾಂಡ್ ಪೋಸ್ಟ್​ನ ಚಿಕ್ಕದರ್ಗಾದ ಅಯಾಜ್ ಖಾನ್ ಪುತ್ರಿ ಸೆಹರೀನ್ ತಾಜ್‌ (2) ಮೖತಪಟ್ಟ ದುರ್ದೈವಿ. ಚಿಕ್ಕದರ್ಗಾದ ಸಮೀಪದಲ್ಲಿ ಶುಕ್ರವಾರ ರಾತ್ರಿ ಆಟವಾಡುತ್ತಿದ್ದ ವೇಳೆ ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸೈಯದ್ ಅಬ್ದುಲ್ ಗನಿ ಎಂಬಾತ ತನ್ನ ಡಸ್ಟರ್ ಕಾರನ್ನು ರಿವರ್ಸ್​​ ತೆಗೆಯುವ ಸಂದರ್ಭದಲ್ಲಿ ಆಟವಾಡುತ್ತಿದ್ದ ಸೆಹರಿನ್ ತಾಜ್​ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾಳೆ.

ಮೃತಪಟ್ಟ ಬಾಲಕಿಯ ತಂದೆ ಅಯಾಜ್ ಖಾನ್ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಆರೋಪಿ ಸೈಯದ್ ಅಬ್ದುಲ್​ನನ್ನು ಬಂಧಿಸಿದ್ದಾರೆ.

ವರದಿ: ಗೂಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com