ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕಾಗಿ ತಾಲೂಕಿನ ಕಿಕ್ಕೇರಿ ಗ್ರಾಮಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.
ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ ಬಳಿಕ ಹಾರದಲ್ಲಿದ್ದ ಸೇಬಿನ ಹಣ್ಣಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದು, ಕಿತ್ತಾಡಿಕೊಂಡ ಘಟನೆ ನಡೆಯಿತು.
ಇದುವರೆಗೂ ಸೇಬು ಹಣ್ಣು ನೋಡಿರದ ಹಾಗೆ ಕಾರ್ಯಕರ್ತರು ಒಬ್ಬರ ಮೇಲೋಬ್ಬರು ಬಿದ್ದು, ಹಣ್ಣುಗಳನ್ನು ಕೀಳುತ್ತಿದ್ದರು.
ಹಾರ ಹಿಡಿದು ಕಿತ್ತಾಡುತ್ತಿದ್ದಂತೆ ಜೆಸಿಬಿಯಿಂದ ಬೃಹತ್ ಗ್ರಾತ್ರದ ಸೇಬಿನ ಹಾರ ಕೆಳಗೆ ಬಿದ್ದಿದ್ದು, ನುಕುನುಗ್ಗಲು ಆರಂಭವಾಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರನ್ನು ಚದುರಿಸಿದರು.
- ನಾಗಯ್ಯ
Advertisement