ಕ್ಯಾಲಿಫೋರ್ನಿಯಾದಲ್ಲಿ ಮೈಸೂರು ವಿದ್ಯಾರ್ಥಿ ಗುಂಡೇಟಿಗೆ ಬಲಿ 

ಮೈಸೂರಿನ ಖ್ಯಾತ ಯೋಗ ಶಿಕ್ಷಕ ಸುದೇಶ್ ಚಾಂದ್ ಅವರ ಪುತ್ರ ಅಭಿಷೇಕ್ ಸುದೇಶ್ ಭಟ್ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಅಭಿಷೇಕ್ ಭಟ್
ಅಭಿಷೇಕ್ ಭಟ್

ಮೈಸೂರು: ಮೈಸೂರಿನ ಖ್ಯಾತ ಯೋಗ ಶಿಕ್ಷಕ ಸುದೇಶ್ ಚಾಂದ್ ಅವರ ಪುತ್ರ ಅಭಿಷೇಕ್ ಸುದೇಶ್ ಭಟ್ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ ಬರ್ನಾರ್ಡ್‌ಡಿನೋ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ, ಅಭಿಷೇಕ್‌ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. 

ಘಟನೆ ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿದೆ.

 ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್‌ (25), ಮೈಸೂರಿನ ವಿದ್ಯಾವಿಕಾಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿ, ಬಳಿಕ ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದರು. 

ವಾರಾಂತ್ಯದಲ್ಲಿ ಅಭಿಷೇಕ್‌, ಕ್ಯಾಲಿಫೋರ್ನಿಯಾದ ಸನ್‌ ಬೆರ್ನಾರ್ಡಿನೋ ಹೋಟೆಲ್‌ನಲ್ಲಿ ಸಂಪಾದನೆಗಾಗಿ ರಿಸೆಪ್ಷನಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿನ ಗ್ರಾಹಕನೊಬ್ಬ ಅಭಿಷೇಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಈ ವರ್ಷ ರಜೆಗೆ ತಮ್ಮ ಮಗ ಬರುತ್ತಾನೆಂದು ಕಾದಿದ್ದ ಪೋಷಕರಿಗೆ ಮಗನ ಸಾವಿನ ವಿಷಯ ಕೇಳಿ ಆಘಾತವಾಗಿದೆ. ಅಮೆರಿಕಾಗೆ ತೆರಳಲು ಮೃತ ವಿದ್ಯಾರ್ಥಿಯ ಪೋಷಕರು ಸಂಸದ ಪ್ರತಾಪ್ ಸಿಂಹ ಅವರ ಸಹಾಯ ಕೋರಿದ್ದಾರೆ, ಪ್ರತಾಪ್ ಸಿಂಹ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com