ಬೆಂಗಳೂರು: ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯ ತಜ್ಞರು 16 ವರ್ಷದ ಬಾಲಕಿಗೆ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಿಂದ ಬಂದಿದ್ದ ರುಮಾ ಪ್ರವೀಣ್ ಎಂಬ ಬಾಲಕಿಯ ಎದೆಯಲ್ಲಿ 2 ಇಂಚಿನಷ್ಟು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಬದಲು ಕವಾಟವನ್ನು ಸರಿಪಡಿಸಬೇಕೆಂದು ಭಾವಿಸಿದ ವೈದ್ಯರು, ಸ್ವಲ್ಪ ಕಡಿಮೆ ವೆಚ್ಚದಲ್ಲಿಯೇ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಕಡಿಮೆ ರಕ್ತಸ್ರಾವವಾಗಿದೆ. ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯ ವಾಸ್ತವ್ಯದ ಅವಧಿಯನ್ನು ಕಡಿತಗೊಳಿಸಲಾಗಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಕುರಿತು ವಿವರಿಸಿದ ವೈದ್ಯರು, ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನೇ ನಡೆಸಲಾಗುತ್ತದೆ. ಅಲ್ಲದೇ, ಕವಾಟ ಬದಲಿಸುವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಈ ವಿಧಾನದಿಂದ ಮಿದುಳಿನಲ್ಲಿ ರಕ್ತಸ್ರಾವವೂ ಆಗುವ ಆಪಾಯವಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಈ ಯಾವ ಸಮಸ್ಯೆಯೂ ಆಗಲಿಲ್ಲ ಎಂದರು.
ರಾಜ್ಯ ಹಾಗೂ ಹೊರ ರಾಜ್ಯದಲ್ಲಿನ ಸಾಮಾಜಿಕ ಹಾಗೂ ಆರ್ಥಿಕವಾಗಿ ಕೆಳಗಿರುವ ಸಹಸ್ರಾರು ರೋಗಿಗಳಿಗೆ ಈ ಶಸ್ತ್ರ ಚಿಕಿತ್ಸೆ ಅನುಕೂಲಕರವಾಗಲಿದೆ. ಈ ತಂತ್ರಜ್ಞಾನ ಮತ್ತು ಕೌಶಲ್ಯವನ್ನು ಪಾಶ್ಚಿಮಾತ್ಯ ದೇಶಗಳೂ ಸಹ ವರ್ಗಾಯಿಸಲಾಗುತ್ತದೆ ಎಂದು ವೈದ್ಯ ತಾಮೀನ್ ಅಹ್ಮದ್ ಹೇಳಿದರು.
Advertisement