ಹುಚ್ಚಾ ವೆಂಕಟ್ ಮತ್ತೆ ಹುಚ್ಚಾಟ: ಕಾಲೇಜು ಯುವತಿ ಜೊತೆಗೆ ಅನುಚಿತ ವರ್ತನೆ-ವಿಡಿಯೋ ವೈರಲ್

ಹುಚ್ಚಾ ವೆಂಕಟ್ ಮತ್ತೆ ಹುಚ್ಚಾಟ ನಡೆಸಿದ್ದಾನೆ.ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿಯ ಮಾರಸಂದ್ರ ಟೋಲ್ ಗೇಟ್ ಬಳಿ ಬಸ್ ಗಾಗಿ ಕಾಯುತ್ತಿದ್ದ ಕಾಲೇಜು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಹುಚ್ಚಾ ವೆಂಕಟ್
ಹುಚ್ಚಾ ವೆಂಕಟ್

ಬೆಂಗಳೂರು: ಕೆಲ ದಿನಗಳ ಹಿಂದೆ ಮಡಿಕೇರಿ ಹಾಗೂ ಮಂಡ್ಯದಲ್ಲಿ ಕಾರಿಗೆ ಕಲ್ಲು ಎತ್ತಿಹಾಕಿ ಸಾರ್ವಜನಿಕರಿಂದ ಹಲ್ಲೆಗೊಳಗಾಗಿದ್ದ ಹುಚ್ಚಾ ವೆಂಕಟ್ ಮತ್ತೆ ಹುಚ್ಚಾಟ ನಡೆಸಿದ್ದಾನೆ. ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿಯ ಮಾರಸಂದ್ರ ಟೋಲ್ ಗೇಟ್ ಬಳಿ ಬಸ್ ಗಾಗಿ ಕಾಯುತ್ತಿದ್ದ ಕಾಲೇಜು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಟೋಲ್ ಗೇಟ್ ಬಳಿ ಬಸ್ ಗಾಗಿ ಕಾಯುತ್ತಿದ್ದ ಹುಡುಗಿಗೆ ಹುಚ್ಚಾ ವೆಂಕಟ್ ಪ್ರೀತಿಸುವಂತೆ ಪ್ರಪೋಸ್  ಮಾಡಿದ್ದಾನೆ. ನಂತರ ಆಕೆಯನ್ನು ಹಿಂಬಾಲಿಸಿ ತನ್ನ ಮದುವೆಯಾಗುವಂತೆ ಕಾಟ ಕೊಡಲು ಶುರು ಮಾಡಿದ್ದಾನೆ.ಇದರಿಂದ ಹೆದರಿದ ಯುವತಿ ಅಲ್ಲಿಂದ ತೆರಳಿದ್ದಾಳೆ. 

ನಂತರ ವೆಂಕಟ್ ತನ್ನ ಕಾರಿನ ಮುಂಭಾಗದ ಗಾಜುಗಳನ್ನು ಕಲ್ಲಿನಿಂದ ಹೊಡೆದಿದ್ದಾನೆ. ಈತನ ಹುಚ್ಚಾಟ ನೋಡಲು ಜನರು ಗುಂಪಾಗಿ ಸೇರಿದ್ದಾರೆ. ನಂತರ ತನ್ನ ಫರ್ಸ್ ಕಳ್ಕೊಂಡಿದ್ದ ವೆಂಕಟ್  ಅವರಿಗೆ ಜನರೇ ಹಣ ನೀಡಿದ್ದಾರೆ.ಸ್ಥಳಕ್ಕೆ ಧಾವಿಸಿದ ರಾಜನುಕುಂಟೆ ಪೊಲೀಸರು ಹುಚ್ಚ ವೆಂಕಟ್ ನನ್ನು ಕರೆದುಕೊಂಡು ಹೋಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com