ಅನೈತಿಕ ಸಂಬಂಧದ ಶಂಕೆ: ಇಂಡಿಯಲ್ಲಿ ಮಾವ, ಸೊಸೆ ಬರ್ಬರ ಹತ್ಯೆ!

 ಅನೈತಿಕ ಸಂಬಂ ದಹದ ಶಂಕೆಯ ಹಿನ್ನೆಲೆಯಲ್ಲಿ ಮಾವ ಮತ್ತು ಸೊಸೆ ಬರ್ಬರ ಹತ್ಯೆಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನ ಖೇಡಗಿ ಕ್ರಾಸ್ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯಪುರ: ಅನೈತಿಕ ಸಂಬಂ ದಹದ ಶಂಕೆಯ ಹಿನ್ನೆಲೆಯಲ್ಲಿ ಮಾವ ಮತ್ತು ಸೊಸೆ ಬರ್ಬರ ಹತ್ಯೆಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನ ಖೇಡಗಿ ಕ್ರಾಸ್ ಬಳಿ ನಡೆದಿದೆ.

ತಾಲೂಕಿನ  ಖೇಡಗಿ ಕ್ರಾಸ್ ಸಮೀಪದ ತೋಟದ ಮನೆಯಲ್ಲಿ ನಡೆದ ಘಟನೆಯಲ್ಲಿ ಶಿರಗೂರ ಗ್ರಾಮದ ನಿವಾಸಿಗಳು ಮಾವ ಮಾಳಪ್ಪ ಧರ್ಮಣ್ಣ ಪೂಜಾರಿ (65) ಹಾಗೂ ಸೊಸೆ ರೇಣುಕಾ ಪುಟ್ಟಣ್ಣ ಪೂಜಾರಿ (35) ಹತ್ಯೆಯಾಗಿದ್ದಾರೆ.

ರೇಣುಕಾಳ ಪತಿ ಪುಟ್ಟಣ್ಣನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ತಂದೆ ಹಾಗೂ ಪತ್ನಿ ನಡುವೆ ಅನೈತಿಕ ಸಂಬಂಧವಿದೆ ಎಂದು ಅನುಮಾನಗೊಂಡಿದ್ದ ಪುಟ್ಟಣ್ಣ  ಕಳೆದ ರಾತ್ರಿ ಈ ಜೋಡಿ ಕೊಲೆ ಮಾಡಿದ್ದಾನೆ.

ಮೃತರು ಶಿರಗೂರ ಗ್ರಾಮಸ್ಥರಾಗಿದ್ದು ಹೊಟ್ಟೆಪಾಡಿಗಾಗಿ  ಖೇಡಗಿಯ ಶ್ರೀಶೈಲ ಸೊನ್ನ ಅವರ ಹೊಲದಲ್ಲಿ ಕೆಲಸಕ್ಕಿದ್ದರು.

ಕೃತ್ಯದ ನಂತರ ಆರೋಪಿ ತಲೆಮರೆಸಿಕೊಂಡಿದ್ದು ಘಟನೆ ಸಂಬಂಧ ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com