ಕಲಬುರಗಿ: ಇಬ್ಬರು ಯುವಕರು ನೀರು ಪಾಲು

ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಅಕ್ಕಪಕ್ಕ ಮನೆಯ 19 ವರ್ಷದ ಗಣೇಶ್ ಮತ್ತು 18 ವರ್ಷದ ಗೋಪಾಲ್ ಮೃತ ದುರ್ದೈವಿಗಳು. 

ದಸರಾ ಹಬ್ಬದ ಪ್ರಯುಕ್ತ ಒಂಭತ್ತು ದಿನಗಳ ಕಾಲ ಸಸಿಗಳನ್ನು ಬೆಳೆಸಿ, ಇಂದು ವಿಸರ್ಜನೆ ಮಾಡಲು ಗ್ರಾಮದ ಹೊರವಲಯದ ಕೆರೆಗೆ ಗಣೇಶ್ ಮತ್ತು ಗೋಪಾಲ್ ತೆರಳಿದ್ದರು. ಈ ವೇಳೆ ಇಬ್ಬರು ಕಾಲು ಜಾರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸಸಿ ವಿಸರ್ಜಿಸಲು ಹೋದ ಯುವಕರು ತುಂಬಾ ಹೊತ್ತಾದರೂ ಮನೆಗೆ ಮರಳದಿದ್ದಕ್ಕೆ, ಆತಂಕಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಅವರಿಬ್ಬರೂ ಕಾಣಿಸದಿದ್ದಾಗ, ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಗಣೇಶ್ ಮತ್ತು ಗೋಪಾಲ ಅವರ ಮೃತದೇಹಗಳು ಪತ್ತೆಯಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com