ಕದ್ರಿ ಗೋಪಾಲನಾಥ್ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಯ್ತು ಕಟೀಲ್ ಫೇಸ್ ಬುಕ್ ಪೋಸ್ಟ್

ನಿನ್ನೆ ನಿಧನರಾದ್ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಅವರ ಅಂತಿಮ ದರ್ಶನ ಪಡೆದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೋಪಾಲನಾಥ್ ಅವರ ಕುಟುಂಬಸ್ಥರಲ್ಲಿ ಅಸಮಾಧಾನ ಮೂಡಿಸಿದೆ.
ಕದ್ರಿ ಗೋಪಾಲನಾಥ್ ದರ್ಶನ ಪಡೆದ ಕಟೀಲ್
ಕದ್ರಿ ಗೋಪಾಲನಾಥ್ ದರ್ಶನ ಪಡೆದ ಕಟೀಲ್

ಮಂಗಳೂರು: ನಿನ್ನೆ ನಿಧನರಾದ್ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಅವರ ಅಂತಿಮ ದರ್ಶನ ಪಡೆದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್  ಕಟೀಲ್ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೋಪಾಲನಾಥ್ ಅವರ ಕುಟುಂಬಸ್ಥರಲ್ಲಿ ಅಸಮಾಧಾನ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ಖಾಸಗಿ ಆಸ್ಪತ್ರೆಗೆ ತೆರಳಿ  ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದರು ಇದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. 

ಗೋಪಾಲನಾಥ್ ಅವರ ಮೃತ ದೇಹವನ್ನು ಕೋಲ್ಡ್ ಸ್ಟೋರೇಜ್ ನಲ್ಲಿಡಲಾಗಿತ್ತು, ಈ ವೇಳೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್, ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದ ಜನಪ್ರಿಯ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅವಶೇಷಗಳಿಗೆ ನಾನು ಗೌರವ ಸಲ್ಲಿಸಿದೆ ಎಂದು ಬರೆದುಕೊಂಡಿದ್ದರು. 

ನಾವು ಶವವನ್ನು ಸೋಮವಾರ ಸಾರ್ವಜನಿಕರಿಗೆ ಇಡುವ ಸಲುವಾಗಿ ಶೈತ್ಯಾಗಾರದಲ್ಲಿಟ್ಟಿದ್ದೆವು, ಆದರೆ ಆತುರವಾಗಿ ಪೋಸ್ಟ್ ಹಾಕಿರುವ ನಳಿನ್ ಕುಮಾರ್ ನಾನು ಮೃತರ ದೇಹದ ಅವಶೇಷಗಳಿಗೆ ನಾನು ಅಂತಿಮ ನಮನ ಸಲ್ಲಿಸಿದ್ದೇನೆ ಎಂದು ಹಾಕಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದು ಗೋಪಾಲನಾಥ್ ಕುಟುಂಬಸ್ಥರುಪ ಬೇಸರ ವ್ಯಕ್ತಪಡಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com