ಶಿಂಷಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಮದ್ದೂರು ತಾಲೂಕಿನ ಹುನುಗನಹಳ್ಳಿಯ ಬಳಿ ಶಿಂಷಾ ನದಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಮದ್ದೂರು ತಾಲೂಕಿನ ಹುನುಗನಹಳ್ಳಿಯ ಬಳಿ ಶಿಂಷಾ ನದಿಯಲ್ಲಿ ನಡೆದಿದೆ.

ಮನು( 10), ನವೀನ್ (15) ಮೃತ ಬಾಲಕರು.

 ಶಿಂಷಾ ನದಿಯಲ್ಲಿ ಈಜಲು ಮೂವರು ಯುವಕರು ತೆರಳಿದ್ದು,ಇವರಲ್ಲಿ ಇಬ್ಬರು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಗ್ರಾಮಸ್ಥರ ಸಹಾಯದಿಂದ ಬಾಲಕರ ಶವಗಳಿಗಾಗಿ ಶೋಧನೆ ನಡೆಸುತ್ತಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಾಹಿತಿ: ಆರ್ ಸಿ ನೆಟ್ವರ್ಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com