ತುಮಕೂರು: ಅನಿಲ ಸೋರಿಕೆಯಾಗಿ‌‌ ಬಾಲಕ ಸಾವು

ಮ್ಯಾಗಿ ಮಾಡಲು ಬಾಲಕನೋರ್ವ ಗ್ಯಾಸ್ ಸ್ವೌ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿ ಮೃತಪಟ್ಟಿರುವ ದುರ್ಘಟನೆ ನಗರದ ಕ್ರಿಶ್ಚಿಯನ್​ ಸ್ಟ್ರೀಟ್​ನಲ್ಲಿ ನಡೆದಿದೆ. 
ತುಮಕೂರು: ಅನಿಲ ಸೋರಿಕೆಯಾಗಿ‌‌ ಬಾಲಕ ಸಾವು
ತುಮಕೂರು: ಅನಿಲ ಸೋರಿಕೆಯಾಗಿ‌‌ ಬಾಲಕ ಸಾವು

ತುಮಕೂರು: ಮ್ಯಾಗಿ ಮಾಡಲು ಬಾಲಕನೋರ್ವ ಗ್ಯಾಸ್ ಸ್ವೌ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿ ಮೃತಪಟ್ಟಿರುವ ದುರ್ಘಟನೆ ನಗರದ ಕ್ರಿಶ್ಚಿಯನ್​ ಸ್ಟ್ರೀಟ್​ನಲ್ಲಿ ನಡೆದಿದೆ. 

7 ವರ್ಷದ ನೋಯಲ್​ ಪ್ರಸಾದ್ ಎಂಬ ಬಾಲಕ ಪಾಲಕರಿಗೆ ತಾನೇ ಮ್ಯಾಗಿ ಮಾಡುವುದಾಗಿ ತಿಳಿಸಿದ್ದ. ನಂತರ ಅಡುಗೆ ಮನೆಗೆ ಹೋಗಿ ಗ್ಯಾಸ್​ ಸ್ಟೌ ಆನ್​ ಮಾಡಿದ್ದಾನೆ. 

ಆದರೆ, ಲೈಟರ್​ನಲ್ಲಿ ಬೆಂಕಿ ಹಚ್ಚಲು ತಡ ಮಾಡಿದ ಕಾರಣ ಜಾಸ್ತಿ ಗ್ಯಾಸ್​ ಸೋರಿಕೆ ಆಗಿದೆ. ಬಳಿಕ ಒಮ್ಮೆಲೇ ಜೋರಾಗಿ ಬೆಂಕಿ ಹೊತ್ತುಕೊಂಡು ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಬಾಲಕನ‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತುಮಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com