ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಾಗಾಭರಣ, ವಿವಿಧ ಅಕಾಡಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ ಅಧಿಸೂಚನೆ ಪ್ರಕಟ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರ ಹೊಸದಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕರ್ನಾಟಕದ ವಿವಿಧ ಅಕಾಡಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ ಮಾಡಿ ಆದೇಶಿಸಿದೆ.
ಟಿ. ಎಸ್ ನಾಗಾಭರಣ
ಟಿ. ಎಸ್ ನಾಗಾಭರಣ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರ ಹೊಸದಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕರ್ನಾಟಕದ ವಿವಿಧ ಅಕಾಡಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ ಮಾಡಿ ಆದೇಶಿಸಿದೆ.

ಒಟ್ಟು 16 ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ಆಯ್ಕೆ ಮಾಡಲಾಗಿದ್ದು ಆಯಾ ಅಕಾಡಮಿಗಳು ಹಾಗೂ ಅಧ್ಯಕ್ಷರ ವಿವರ ಹೀಗಿದೆ-

ಕನ್ನಡ ಅಭಿವೃದ್ದಿ ಪ್ರಾಧಿಕಾರ- ಟಿ. ಎಸ್ ನಾಗಾಭರಣ
ಕನ್ನಡ ಪುಸ್ತಕ ಪ್ರಾಧಿಕಾರ - ಡಾ. ಎಂ.ಎನ್ ನಂದೀಶ್ ಹಂಜೆ
ಕರ್ನಾಟಕ ನಾಟಕ ಅಕಾಡೆಮಿ - ಭೀಮಸೇನ
ಕರ್ನಾಟಕ ಶಿಲ್ಪಕಲಾ ಅಕಾಡೆಮಿ - ವೀರಣ್ಣ ಅರ್ಕಸಾಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ- ಪ್ರೊ. ಎಂ.ಎ ಹೆಗ್ಡೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ- ದಯಾನಂದ ಕತ್ತಲಸರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ - ಡಾ. ಜಗದೀಶ್ ಪೈ
ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ - ಲಕ್ಷ್ಮೀ ನಾರಾಯಣ ಕಜೆಗದ್ದೆ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ- ಅಜರ್ಕಳ ಗಿರೀಶ್ ಭಟ್
ಕನ್ನಡ ಸಾಹಿತ್ಯ ಅಕಾಡೆಮಿ - ಡಾ. ಬಿ.ವಿ ವಸಂತ ಕುಮಾರ್
ಕರ್ನಾಟಕ ಸಂಗೀತ- ನೃತ್ಯ ಅಕಾಡೆಮಿ - ಆನೂರು ಅನಂತ ಕೃಷ್ಣ ಶರ್ಮ
ಕರ್ನಾಟಕ ಲಲಿತಾ ಕಲಾ ಅಕಾಡೆಮಿ - ಡಿ. ಮಹೇಂದ್ರ
ಕರ್ನಾಟಕ ಜಾನಪದ ಅಕಾಡೆಮಿ- ಮಂಜಮ್ಮ ಜೋಗತಿ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ- ಡಾ. ಪಾರ್ವತಿ ಅಪ್ಪಯ್ಯ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ - ರಹೀಂ ಉಚ್ಚಿಲ
ಕರ್ನಾಟಕ ಬಯಲಾಟ ಅಕಾಡೆಮಿ - ಸೊರಬಕ್ಕನವರ್ ಹಾವೇರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com