ಶಿವಮೊಗ್ಗ: ಎಸ್‍ಬಿಐ ಮ್ಯಾನೇಜರ್ ನೇಣಿಗೆ ಶರಣು

ಜೋಗ್ ಫಾಲ್ಸ್ ಎಸ್‍ಬಿಐ ಶಾಖೆಯ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ವರದಿಯಾಗಿದೆ.
ಶಿವಮೊಗ್ಗ: ಎಸ್‍ಬಿಐ ಮ್ಯಾನೇಜರ್ ನೇಣಿಗೆ ಶರಣು
ಶಿವಮೊಗ್ಗ: ಎಸ್‍ಬಿಐ ಮ್ಯಾನೇಜರ್ ನೇಣಿಗೆ ಶರಣು

ಶಿವಮೊಗ್ಗ: ಜೋಗ್ ಫಾಲ್ಸ್ ಎಸ್‍ಬಿಐ ಶಾಖೆಯ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ವರದಿಯಾಗಿದೆ.

ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲಿ ಎಸ್‍ಬಿಐ ಶಾಖೆಯ ಮ್ಯಾನೇಜರ್ ಆಗಿದ್ದ ಅನಿಲ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಕೆಲಸದ ಒತ್ತಡ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದ್ದು ಅನಿಲ್ ಅವರ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಎರಡು ದಿನಗಳಿಂದ ರಜೆಯಲ್ಲಿದ್ದ ಅನಿಲ್ ಕುಮಾರ್ ಇಂದು ಶಾಖೆಗೆ ತೆರಳಿ ಬಾಗಿಲು ತೆರಿದ್ದಾರೆ. ಆದರೆ ಕೆಲವೇ ಸಮಯದಲ್ಲಿ ಮತ್ತೆ ಮನೆಗೆ ಆಗಮಿಸಿದ ಅವರು ಪತ್ನಿಯನ್ನು ಹೊರಗೆ ಕಳಿಸಿದ್ದು ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಜೋಗ್ ಫಾಲ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com