ವರದಾ ನದಿಯಲ್ಲಿ ಕಾಲು ಜಾರಿದ ಯುವಕ,  ರಕ್ಷಿಸಲು ಹೋದ ವೃದ್ಧ ಇಬ್ಬರು ನೀರುಪಾಲು

ವರದಾ ನದಿಯಲ್ಲಿ ಎತ್ತಿನ ಮೈತೊಳೆಯುತ್ತಿದ್ದ ವೇಳೆ ಆಯತಪ್ಪಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರುಪಾಲಾದ ಘಟನೆ ಹಾವೇರಿ ತಾಲೂಕು ಹಂದಿಗನೂರ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾವೇರಿ: ವರದಾ ನದಿಯಲ್ಲಿ ಎತ್ತಿನ ಮೈತೊಳೆಯುತ್ತಿದ್ದ ವೇಳೆ ಆಯತಪ್ಪಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರುಪಾಲಾದ ಘಟನೆ ಹಾವೇರಿ ತಾಲೂಕು ಹಂದಿಗನೂರ ಗ್ರಾಮದಲ್ಲಿ ನಡೆದಿದೆ.

ಪ್ರಶಾಂತ ಸೋಮಪ್ಪ ಕೊಂಚಿಗೇರಿ (18) ಮತ್ತು  ಪರಮೇಶಪ್ಪ ಕಮ್ಮಾರ (62) ನೀರುಪಾಲಾದ ದುರ್ದೈವಿಗಳು.

ಎತ್ತಿನ ಮೈ ತೊಳೆಯಲು ಮಾವನ ಜೊತೆ ಹೋಗಿದ್ದ ಪ್ರಶಾಂತ್ ಕಾಲುಜಾರಿ ವರದಾ ನದಿಯಲ್ಲಿ ಮುಳುಗಿದ್ದಾರೆ. 

ಇದನ್ನು ಕಂಡು ಅಲ್ಲೆ  ಸ್ನಾನ ಮಾಡುತ್ತಿದ್ದ  ವೃದ್ಧರೋರ್ವರು ಪ್ರಶಾಂತ್ ರಕ್ಷಣೆಗೆ ಮುಂದಾಗಿದ್ದರು. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಇಬ್ಬರೂ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು , ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com