ಹೊಸಪೇಟೆ: ಬೈಕ್ ಸವಾರನೊಬ್ಬ ಬೈಕ್ ತೊಳೆಯಲಿಕ್ಕಾಗಿ ಕಾಲುವೆಗೆ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ.
ಹಗರಿಬೊಮ್ಮನಹಳ್ಳಿಯ ತಾಲೂಕಿನ ವರದಾಪುರ ಗ್ರಾಮದ ಶೇಖರಪ್ಪ(36) ಸಾವಿಗೀಡಾಗಿರುವ ದುರ್ದೈವಿ.
ಬಳ್ಳಾರಿ ಜಿಲ್ಲೆ ಹೊಸಪೇಟೆಯ ಚಿತ್ವಾಡ್ಗಿ ಬಳಿ ಹರಿದಿರುವ ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಘಟನೆ ಇದಾಗಿದ್ದು ಇಂದು ಕಮಲಾಪುರ ಸಮೀಪ ವ್ಯಕ್ತಿಯ ಶವ ಪತ್ತೆಯಾಗಿದೆ.
ದೀಪಾವಳಿ ಹಿನ್ನೆಲೆ ಬೈಕ್ ತೊಳೆದು ಪೂಜಿಸಲು ಶೇಖರಪ್ಪ ಮುಂದಾಗಿದ್ದರೆಂದು ತಿಳಿದುಬಂದಿದೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement