ವಿಜಯಪುರ: ಭೀಮಾ ತೀರದ ಕೊಲೆ ಆರೋಪಿ ಬೈರಗೊಂಡಗೆ ಗೌರವ ಡಾಕ್ಟರೇಟ್

ಭೀಮಾತೀರದ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ಜಾಮೀನಿನ ಮೇಲೆ ಹೊರಬಂದಿರುವ ಮಹದೇವ ಸಾಹುಕಾರ ಬೈರಗೊಂಡ ಅವರಿಗೆ ಇಂಡೋನೇಷ್ಯಾ ಮೂಲದ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.
ಭೀಮಾ ತೀರದ ಕೊಲೆ ಆರೋಪಿ ಬೈರಗೊಂಡಗೆ ಗೌರವ ಡಾಕ್ಟರೇಟ್
ಭೀಮಾ ತೀರದ ಕೊಲೆ ಆರೋಪಿ ಬೈರಗೊಂಡಗೆ ಗೌರವ ಡಾಕ್ಟರೇಟ್

ವಿಜಯಪುರ: ಭೀಮಾತೀರದ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ಜಾಮೀನಿನ ಮೇಲೆ ಹೊರಬಂದಿರುವ ಮಹದೇವ ಸಾಹುಕಾರ ಬೈರಗೊಂಡ ಅವರಿಗೆ ಇಂಡೋನೇಷ್ಯಾ ಮೂಲದ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.

ಇಂಡೋನೇಷಿಯಾದ ಏಷ್ಯನ್ ಇಂಟರ್ ನ್ಯಾಷನಲ್ ಇಂಡೋನೇಷಿಯಾ ವಿವಿ ಇಂಡೋನೇಷ್ಯಾ ಗಣರಾಜ್ಯದ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಿದೆ. ಈ ಸಾಂಸ್ಥೆ ಮಹದೇವ ಅರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರ್ಗಣಿಸಿ ಈ ಗೌರವ ನೀಡಿದೆ.

ಮಹದೇವ ಅವರು  1,500 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಭೈರವನಾಥ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ಇದೇ ವೇಳೆ ಕೊಲೆ ಆರೋಪಿಯಾಗಿರುವ ಬೈರಗೊಂಡಗೆ ಡಾಕ್ಟರೇಟ್ ನೀಡಿರುವ ಕುರಿತು ವಿಜಯಪುರದ ನಿವಾಸಿಗಳು ಆಘಾತಕ್ಕೊಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com