ಗೌರಿ ಹತ್ಯೆಗೆ 2 ವರ್ಷ: 'ಆಕೆ ಮಾಡಿರುವ ಕೆಲಸ ಹಾಗೂ ಆಕೆ ಜನಮಾನಸದಲ್ಲಿ ಗೌರಿ ಚಿರಾಯು'

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಗುರವಾರಕ್ಕೆ ಸರಿಯಾಗಿ 23 ವರ್ಷ ಕಳೆಯಿತು. ಸೆಪ್ಟಂಬರ್ 5 2017 ರಂದಪ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾತ್ರಿ ಸುಮಾರು 8.30ಕ್ಕೆ ಪರಶುರಾಮ್ ವಾಗ್ಮೋರೆ ಗುಂಡಿಗೆ ಗೌರಿ ಲಂಕೇಶ್ ಬಲಿಯಾಗಿದ್ದರು
ಗೌರಿ ಲಂಕೇಶ್
ಗೌರಿ ಲಂಕೇಶ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಗುರವಾರಕ್ಕೆ ಸರಿಯಾಗಿ 23 ವರ್ಷ ಕಳೆಯಿತು. ಸೆಪ್ಟಂಬರ್ 5 2017 ರಂದಪ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾತ್ರಿ ಸುಮಾರು 8.30ಕ್ಕೆ ಪರಶುರಾಮ್ ವಾಗ್ಮೋರೆ ಗುಂಡಿಗೆ ಗೌರಿ ಲಂಕೇಶ್ ಬಲಿಯಾಗಿದ್ದರು.

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಅವರ ಸಹೋದರಿ ಕವಿತಾ ಪ್ರತಿಕ್ರಿಯೆ ನೀಡಿದ್ದು, ಗೌರಿ ಹಂತಕರ ಬಗ್ಗೆ ಅಪಾರವಾದ ಕೋಪ, ಆಕ್ರೋಶ ಮನಸ್ಸಿನಲ್ಲಿದೆ, ಆದರೆ ನ್ಯಾಯಾಲಯದಲ್ಲಿ ಅವರ ಮುಖವನ್ನು ನೋಡಲು ಅವರು ಇಷ್ಟ ಪಡಲಿಲ್ಲವಂತೆ,  ನನ್ನ ಮನಸ್ಸಲ್ಲಿ ತಡೆಯಲಾಗದಷ್ಟು ಆಕ್ರೋಷ ಕೋಪ ತಾಪ ಇದೆ, ಆದರೆ ಅವರನ್ನು ನೋಡಲು ನನಗೆ ಇಷ್ಟವಿಲ್ಲ., ಹೀಗಾಗಿ ಕೋರ್ಟ್ ವಿಚಾರಣೆಯಲ್ಲಿ ನಾನು ಭಾಗವಹಿಸಲಿಲ್ಲ, 

ನಾನು ಗೌರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಆಕೆ ನನ್ನ ಸಹೋದರಿ ಎನ್ನುವುದಕ್ಕಿಂತ ಉತ್ತಮ ಸ್ನೇಹಿತೆಯಾಗಿದ್ದಳು, ಆದರೆ ನನ್ನಿಂದ ಆಕೆಯನ್ನು ಕಸಿದು ಕೊಂಡಿದ್ದಾರೆ ಎಂದು ಕವಿತಾ ದುಃಖ ವ್ಯಕ್ತ ಪಡಿಸಿದ್ದಾರೆ, 

ಕೆಲ ಬಾರಿ ನನಗೆ ಗೌರಿ ಇನ್ನೂ ಬದುಕಿದ್ದಾಳೆ ಎಂಬ ಭಾವನೆ ಬರುತ್ತದೆ, ಆಕೆಯ ಕೆಲಸಗಳ ಬಗ್ಗೆ ಹಲವು ಮಂದಿ ಮಾತನಾಡುವಾಗ ನನಗೆ ಆಕೆ ಜೀವಂತ ಎಂದನಿಸುತ್ತದೆ, ಸಾಮಾಜಿಕ ಮಾಧ್ಯಮಗಳಲ್ಲಿ ಗೌರಿ ಬಗ್ಗೆ ಅಪಾರ ಪ್ರಮಾಣದಲ್ಲಿ ಚರ್ಚೆಯಾಗುತ್ತದೆ,.ಅ ವೇಳೆ ಗೌರಿ ನಮ್ಮ ಸುತ್ತಮುತ್ತ ಎಲ್ಲಿಯೋ ಇರುವಳು ಎನ್ನಿಸುತ್ತೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com