ಸೆಂಥಿಲ್ ರಾಜೀನಾಮೆ ಹಿನ್ನೆಲೆ: ದಕ್ಷಿಣ ಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್ ನೇಮಕ

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (ಡಿಸಿ) ಸಿಂಧು ಬಿ. ರೂಪೇಶ್ ನೇಮಕವಾಗಿದ್ದಾರೆ.ಅವರು ಶನಿವಾರ (ಸೆ.7) ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಸಿಂಧು ಬಿ ರೂಪೇಶ್
ಸಿಂಧು ಬಿ ರೂಪೇಶ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  (ಡಿಸಿ) ಸಿಂಧು ಬಿ ರೂಪೇಶ್ ನೇಮಕವಾಗಿದ್ದಾರೆ. ಅವರು ಶನಿವಾರ (ಸೆ.7) ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಸೆಪ್ಟೆಂಬರ್ 6, ಶುಕ್ರವಾರ ಸಸಿಕಾಂತ್ ಸೆಂಥಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ಸರ್ಕಾರ ಸಿಂಧು ರೂಪೇಶ್ ಅವರನ್ನು ಮಂಗಳೂರಿಗೆ ಡಿಸಿ ಆಗಿ ವರ್ಗಾಯಿಸಿತು.

ಸಿಂಧು ರೂಪೇಶ್ ಇದುವರೆಗೂ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದರು.

ಮೈಸೂರಿನ ಇಂಜಿನಿಯರಿಂಗ್ ಪದವೀಧರೆಯಾಗಿರುವ ಸಿಂಧು  2011 ಬ್ಯಾಚ್‌ನ  ಐಎಎಸ್ ಅಧಿಕಾರಿ. ಅವರು ಆ ವರ್ಷದ ರಾಜ್ಯದ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿವಿಲ್ ಸರ್ವೀಸ್ ಪರೀಕ್ಷೆ) ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com