ಬಳ್ಳಾರಿ: ತುಂಗಾಭದ್ರ ಜಲಾಶಯದಿಂದ ನೀರನ್ನು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಗ ಶುಕ್ರವಾರ ಹಂಪಿಯ ಹಲವು ಸ್ಮಾರಕಗಳು ನೀರಿನಲ್ಲಿ ಮುಳುಗಿವೆ.
ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ವಿರೂಪಾಪುರ ಗಡ್ಡೆ ಸಂಪರ್ಕ ಕಳೆದುಕೊಂಡಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಪೊಲೀಸರು ಕೋದಂಡರಾಮ ದೇವಾಲಯಕ್ಕೆ ಹೊಂದಿಕೊಂಡಿರುವ ಸ್ಥಳಕ್ಕೆ ಹೆಚ್ಚಿನ ಭಧ್ರತೆ ಒದಗಿಸಿದ್ದಾರೆ.
ಯಾವುದೇ ಪ್ರವಾಗಸಿಗರನ್ನು ನದಿಯ ಹತ್ತಿರಕ್ಕೆ ಬಿಡುತ್ತಿಲ್ಲ, ಗುರುವಾರ ತುಂಗಭದ್ರಾ ಜಲಾಶಯದ ಒಳಹರಿವು 50 ಸಾವಿರ ಕ್ಯೂಸೆಕ್ಸ್ ಇದ್ದದ್ದು ಶುಕ್ರವಾರ 70 ಸಾವಿರಕ್ಕೇರಿದೆ. ಶುಕ್ರವಾರ 36 ಕ್ರಸ್ಟ್ ಗೇಟ್ ಗಳಿಂದ 72 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.
Advertisement