ಬೆಂಗಳೂರು; ವಿಶೇಷ ಸಂಪ್ರದಾಯ ಆಚರಣೆ ನೆಪ ಹೇಳಿಕೊಂಡು ಅರ್ಚಕ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅರ್ಚಕನ ವಿರುದ್ಧ ಪೊಲೀಸರು ಸೆಕ್ಷನ್ 354ಎ ಮತ್ತು 354 ಬಿಯಡಿ ಕೇಸು ದಾಖಲಿಸಲಾಗಿದೆ.
ಮಹಿಳೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಳೆದ 10ರಂದು ಕೇಸು ದಾಖಲಿಸಿದ್ದರು. ವೈಯಕ್ತಿಕ ಸಮಸ್ಯೆ ಹೊತ್ತು ಮಹಿಳೆ ಅರ್ಚಕನ ಬಳಿ ಹೋದಾಗ ಅರ್ಚಕ ಎರಡು ಪೂಜೆ ಮಾಡಿಸುವಂತೆ ಹೇಳಿದ್ದಾನೆ. ಒಂದು ಪೂಜೆ ಇಲ್ಲಿ ಮತ್ತೊಂದು ಪೂಜೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಡಿಸಬೇಕೆಂದು ಹೇಳಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗುವಾಗ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದನು ಎಂದು ಮಹಿಳೆ ದೂರಿನಲ್ಲಿ ಹೇಳಿರುವುದಾಗಿ ಪೊಲೀಸ್ ಉಪ ಆಯುಕ್ತ ರಾಹುಲ್ ಕುಮಾರ್ ತಿಳಿಸಿದ್ದಾರೆ.
ದೂರಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement