ಬೆಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಕೆರೆಗೆ ಬಿದ್ದ ಬಾಲನ್ನು ತರ ಹೋದ ಬಾಲಕ ನೀರುಪಾಲಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದ ಘಟನೆಯಲ್ಲಿ ಅಂಬೇಡ್ಕರ್ ನಗರದ ಪ್ರಿಯಾಂಶು (13) ಮೃತಪಟ್ಟಿದ್ದಾನೆ.
ಶಾಲೆ ಮುಗಿಸಿ ಮನೆಗೆ ಬಂದ ಸಂಜೆ ಮನೆಗೆ ಬಂದ ಪ್ರಿಯಾಂಶು ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದಾನೆ. ಈ ವೇಳೆ ಬಾಲ್ ಕೆರೆಯಲ್ಲಿ ಬಿದ್ದಿದೆ. ಇದನ್ನು ತರಲೆಂದು ಬಾಲಕ ಕೆರೆಗೆ ಇಳಿದಿದ್ದಾನೆ. ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಕೆರೆಯಲ್ಲಿ ಮುಳುಗಿದ ಬಾಲಕನಿಗಾಗಿ ಎನ್.ಡಿ.ಆರ್.ಎಫ್ ತಂಡ ರಕ್ಷಣಾ ಕಾರ್ಯ ನಡೆಸಿ ರಾತ್ರಿ ವೇಳೆಗೆ ಬಾಲಕನ ಶವವನ್ನು ಹೊರತೆಗೆದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement